ಮಹಿಳೆಯರಿಗೆ ಸೀರೆ, ಪುರುಷರಿಗೆ ಶರ್ಟ್ ಮತ್ತು ಪ್ಯಾಂಟ್ನ ಆಮಿಷವೊಡ್ಡಿ ಸಮಾವೇಶಕ್ಕೆ ಕರೆತರಲಾಗಿದೆ. ವಿವೇಕಾನಂದ ವೃತ್ತದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಬಂದ ಜನರಿಗೆ ಮುಖಂಡರು ಟೋಕನ್ ವಿತರಣೆ ಮಾಡುತ್ತಿದ್ದಾರೆ. ಸಮಾವೇಶದ ಬಳಿಕ ಟೋಕನ್ ಹಿಂಪಡೆದು ಹೊಸ ಬಟ್ಟೆ ವಿತರಿಸುವುದಾಗಿ ಮುಖಂಡರು ಜನರಿಗೆ ಭರವಸೆ ನೀಡಿದ್ದಾರೆ.