ಐದು ಪತ್ರಿಕಾ ಬರಹಗಳ ಗುಚ್ಛವೇ ಈ ಕೃತಿ. ರಾಮಾನುಜರ ಕ್ರಾಂತಿಕಾರಿ ಹೆಜ್ಜೆಗುರುತುಗಳ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ. ಜತೆಗೆ, ಇಂದಿನ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ವಿಶ್ಲೇಷಣೆ ಇದೆ. ರಾಮಾನುಜರ ಕುರಿತ ಘಟನೆ, ಸಂಗತಿಗಳು ಮತ್ತೆ ಮತ್ತೆ ಪುನರಾವರ್ತನೆಯಾಗಿವೆ. ಆದರೆ, ಮೋಹನ್ರಾಂ ಅವರ ವಸ್ತುನಿಷ್ಠ ಬರವಣಿಗೆ, ಅಪರೂಪದ ಒಳನೋಟಗಳಿಂದ ಒಂದೇ ಗುಟುಕಿನಲ್ಲಿ ಕೃತಿಯು ಓದಿಸಿಕೊಂಡು ಹೋಗುತ್ತದೆ. ಓದುಗನ ಅರಿವು ವಿಸ್ತರಿಸುವುದು ಈ ಕೃತಿಯ ಹೆಚ್ಚುಗಾರಿಕೆ.