‘ನಿಮಗೆ ಹಣ, ತೋಳ್ಬಲ, ಕುರ್ಚಿ, ಅಧಿಕಾರದ ಕಾವು ಹೆಚ್ಚಾಗೈತಿ. ಇನ್ಮುಂದೆ ಬಿಸಿಲ ಝಳವೂ ವಿಪರೀತ ಆಗತೈತಿ. ಮುಂಬರುವ ಮೇ ಮಾಸದಾಗ ಹೆಂಗ ಸಹಜವಾಗಿ ಕಾವು ಇಳೀತೈತಿ ಹಂಗ, ನಿಮ್ಮ ಕಾವನ್ನು ಇಳಿಸಲು ನಾವುಸಿದ್ಧರಾಗಿದ್ದೇವೆ’ ಎಂದು ಸೂಗೂರೇಶ್ವರ ಸ್ವಾಮೀಜಿ ವೇದಿಕೆಯಲ್ಲಿ ಗುಡುಗುತ್ತಿದ್ದಂತೆ, ಮುಂಭಾಗದಲ್ಲಿದ್ದ ಭಕ್ತ ಸಮೂಹ ಹರ್ಷೋದ್ಗಾರ ಮಾಡಿತು.