ದೆಹಲಿಯ ನಿವಾಸಿಯಾದ ಅವರು ಕಾಮಗಾರಿಗೆ ಬಳಸುತ್ತಿದ್ದ ಜನರೇಟರ್ ನಿರ್ವಹಣೆಗಾಗಿ ಶುಕ್ರವಾರ ನಗರಕ್ಕೆ ಬಂದಿದ್ದರು. ಟಿನ್ ಫ್ಯಾಕ್ಟರಿ ಬಳಿ ತೊಡಲಾಗಿದ್ದ ಹಳ್ಳದಲ್ಲಿದ್ದ ಕಂಟೇನರ್ನಲ್ಲಿ ಮಲಗಿದ್ದರು. ಮರಳು ತುಂಬಿಕೊಂಡು ಹೊಸಕೋಟೆ ಕಡೆಯಿಂದ ಬರುತ್ತಿದ್ದ ಟ್ರಕ್ ಶನಿವಾರ ಬೆಳಿಗ್ಗೆ 4.30ರ ಸುಮಾರಿಗೆ ಬ್ಯಾರಿಕೇಡ್ಗೆ ಗುದ್ದಿ ಹಳ್ಳದಲ್ಲಿದ್ದ ಕಂಟೇನರ್ ಮೇಲೆ ಬಿದ್ದಿತ್ತು.
ಅದನ್ನು ಗಮನಿಸಿದ ಸ್ಥಳದಲ್ಲಿದ್ದ ಕಾರ್ಮಿಕರು, ಕ್ರೇನ್ ಮೂಲಕ ಟ್ರಕನ್ನು ಮೇಲೆತ್ತಿದ್ದರು. ಅದಾದ ಬಳಿಕ ಕಂಟೇನರ್ ಒಳಗೆ ಹೋಗಿ ನೋಡಿದಾಗ, ಸೋನುಸಿಂಗ್ ಮೃತಪಟ್ಟಿದ್ದು ಗೊತ್ತಾಗಿದೆ.
‘ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ಆತನಿಗೂ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಿದ್ದೇವೆ. ಕಂಟೇನರ್ನಲ್ಲಿದ್ದ ಕಾರ್ಮಿಕರೊಬ್ಬರನ್ನು ರಕ್ಷಿಸಿದ್ದೇವೆ’ ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ತಿಳಿಸಿದರು.
ಕ್ಲೀನರ್ ಸಾವು: ನೈಸ್ ರಸ್ತೆಯಲ್ಲಿ ನಿಂತಿದ್ದ ಕಂಟೈನರ್ಗೆ ಮಿನಿ ಲಾರಿ ಡಿಕ್ಕಿ ಹೊಡೆದಿದ್ದರಿಂದ ಕ್ಲೀನರ್ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪ್ರೇಮ್ಕುಮಾರ್ (25) ಮೃತಪಟ್ಟಿದ್ದಾರೆ.
ಯಶವಂತಪುರದ ಎಪಿಎಂಸಿ ಮಾರುಕಟ್ಟೆಯಿಂದ ಲಾರಿಯಲ್ಲಿ ಈರುಳ್ಳಿ ತುಂಬಿಕೊಂಡು ಶುಕ್ರವಾರ ರಾತ್ರಿ 12 ಗಂಟೆಗೆ ತಮಿಳುನಾಡಿಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಚಾಲಕ ಬಾಬು ಅವರಿಗೆ ಗಾಯವಾಗಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ತಿಳಿಸಿದರು.