ಉಡುಪಿ:ಕಡಲ ಅಲೆಗಳ ಅಬ್ಬರವನ್ನೂ ಮೀರಿಸುವಂತೆ ಮಲ್ಪೆ ಕಡಲ ಕಿನಾರೆಯಲ್ಲಿ ಶನಿವಾರ ಸಹಸ್ರಾರು ಕಂಠಗಳಿಂದ ‘ವಂದೇ ಮಾತರಂ’ ಮೊಳಗಿತು.ಜಿಲ್ಲೆಯ 23 ಪದವಿ ಕಾಲೇಜುಗಳ ಸುಮಾರು 3,500ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಹತ್ತಕ್ಕೂ ಅಧಿಕ ಮಂದಿ ಹಿನ್ನೆಲೆ ಗಾಯಕರು ಒಂದಾಗಿ ಹಾಡುವ ಮೂಲಕ ರಾಷ್ಟ್ರಪ್ರೇಮ, ಹೆಮ್ಮೆಯನ್ನು ಬಡಿದೆಬ್ಬಿಸಿದರು. ಸಾವಿರಾರು ಜನ ಈ ಕಾರ್ಯಕ್ರಮ ವೀಕ್ಷಿಸಿದರು. ಉಡುಪಿಯ ಸಂವೇದನಾ ಪ್ರತಿಷ್ಠಾನದ ವತಿಯಿಂದ ಸ್ವಾಮಿ ವಿವೇಕಾನಂದ ಅವರ 155ನೇ ಜಯಂತಿ ಅಂಗವಾಗಿ ವಿಶ್ವ ದಾಖಲೆಗಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.