ಈ ಕುರಿತು ತಹಶೀಲ್ದಾರ್ಗೆ ಪತ್ರ ಬರೆದಿರುವ ಅವರು, ‘ಸರ್ಕಾರಿ ಸರ್ವೇ ನಂಬರ್ 167/ಆ ರಲ್ಲಿ 56 ಎಕರೆ 30 ಗುಂಟೆ ಜಮೀನು ಇದೆ. ಖಾಸಗಿ ಕಂಪನಿಯವರು ತಾಲ್ಲೂಕಿನ ರಸ್ತಾಪುರ ಗ್ರಾಮದ ಬಳಿ ನಡೆದ ರಸ್ತೆ ಕಾಮಗಾರಿಗೆ ಮುರಮ್ ಸಾಗಣೆ ಮಾಡುತ್ತಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಕೊಳ್ಳೆ ಹೊಡೆಯುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.