‘ಈ ಕಲಾಕೃತಿಯು ಗಂಗರ ಕಾಲದಾಗಿದ್ದು, ಅಪೂರ್ವವಾದ ಉತ್ತಮ ಶಿಲ್ಪವಾಗಿದೆ. ದೇಶದಲ್ಲಿಯೇ ಉತ್ತಮ ಮತ್ತು ಅತಿ ದೊಡ್ಡ ಗಜಲಕ್ಷ್ಮಿಯ ಉಬ್ಬುಶಿಲ್ಪ.ಈ ಬಾಗಿಲು ಬಾಹುಬಲಿಯ ಉತ್ತರ ದಿಕ್ಕಿಗೆ ನೇರವಾಗಿ ಇರುವುದರಿಂದ 10ನೇ ಶತಮಾನದಲ್ಲಿ ರಚನೆಗೊಂಡು ಬಾಹುಬಲಿ ಮೂರ್ತಿಯವರೆಗೆ ಹೋಗುವ ಪ್ರಮುಖವಾದ ಅಥವಾ ಏಕಮೇವ ದ್ವಾರವಾಗಿದ್ದಿರಬಹುದು ಎಂದು ಊಹಿಸಲಾಗಿದೆ. ದ್ವಾರದ 2 ಬದಿಗಳಲ್ಲಿರುವ ಚಿಕ್ಕ ಮಂದಿರಗಳಲ್ಲಿ ಹೊಯ್ಸಳ ವಿಷ್ಣುವರ್ಧನ್ನ ದಂಡನಾಯಕ ಭರತಮಯ್ಯ ನಿರ್ಮಿಸಿದ ಭರತ ಮತ್ತು ಬಾಹುಬಲಿಯ ಉಬ್ಬು ಶಿಲ್ಪಗಳಿವೆ’ ಎಂದು ಇತಿಹಾಸ ಪ್ರಾಧ್ಯಾಪಕ ಜೀವಂಧರಕುಮಾರ್ ಹೊತಪೇಟೆ ಹೇಳುತ್ತಾರೆ.