ಟಿ.ವಿ. ವಾಹಿನಿಗಳು ಇಂದು ಸ್ಪರ್ಧೆಗಿಳಿದಿವೆ. ಏನಾದರೂ ಸರಿ– ಹೇಗಾದರೂ ಸರಿ, ನಾವು ಮೊದಲು ಪ್ರಸಾರ ಮಾಡಬೇಕು ಎಂಬ ಪೈಪೋಟಿ. ಅವಸರದಿಂದ ಆಗುವ ಅನಾಹುತಗಳ ಬಗ್ಗೆ ಅವುಗಳಿಗೆ ಕಾಳಜಿ ಇಲ್ಲ. ನ್ಯಾಯಬದ್ಧವಾಗಿ ಮಾತನಾಡಲು ಬಾರದವರನ್ನು ಸ್ಟುಡಿಯೊಗೆ ಆಹ್ವಾನಿಸಿ, ಚರ್ಚೆ ನಡೆಸುವುದರಿಂದ ಯುವ ಸಮುದಾಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಇವುಗಳಿಗೆ ಅರಿವು ಇದ್ದಂತಿಲ್ಲ.