ವಾಷಿಂಗ್ಟನ್: ಹವಾಯಿ ದ್ವೀಪದಲ್ಲಿ ಭಾನುವಾರ ಖಂಡಾಂತರ ಕ್ಷಿಪಣಿ ದಾಳಿಯ ಎಚ್ಚರಿಕೆ ಸಂದೇಶ ಮೊಳಗಿದ್ದು, ಇದರಿಂದ ದ್ವೀಪರಾಷ್ಟ್ರದಲ್ಲಿ ಕೆಲ
ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೆಲಹೊತ್ತಿನ ಬಳಿಕ ಇದೊಂದು ‘ತಪ್ಪು ಎಚ್ಚರಿಕೆ ಸಂದೇಶ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಬೆಳಿಗ್ಗೆ 8.05ರ ಸುಮಾರಿಗೆ ಸ್ಥಳೀಯ ನಿವಾಸಿಗಳ ಮೊಬೈಲ್ಗಳಿಗೆ ತಲುಪಿದ ಸಂದೇಶದಲ್ಲಿ, ‘ಹವಾಯಿ ಮೇಲೆ ಖಂಡಾಂತರ ಕ್ಷಿಪಣಿ ಅಪಾಯವಿದೆ, ತಕ್ಷಣವೇ ಸೂಕ್ತ ಆಶ್ರಯ ಪಡೆದುಕೊಳ್ಳಿ, ಇದು ಕವಾಯತು ಅಲ್ಲ’ ಎಂದಿತ್ತು.