ಗ್ರಾಮದಲ್ಲಿ ಸ್ಥಳೀಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಹಿಂದು, ಮುಸ್ಲಿಂ, ಕ್ರೈಸ್ತ ಯಾರೇ ಇರಲಿ ಎಲ್ಲರೂ ಒಟ್ಟಾಗಿ ದೇಶ ನಿರ್ಮಾಣ ಮಾಡಬೇಕು ಎನ್ನುವುದೇ ಆರ್.ಎಸ್.ಎಸ್. ಉದ್ದೇಶ. ದೇಶದ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಲ್ಲ ಶಕ್ತಿ ಆರ್.ಎಸ್.ಎಸ್.ಗೆ ಇದೆ ಎಂದು ಜಗತ್ತು ಇಂದು ಭಾರತಕ್ಕೆ ಮನ್ನಣೆ ಕೊಡುತ್ತಿದೆ ಎಂದರು.