ಗುರುಸಿದ್ಧೇಶ್ವರ ಸ್ವಾಮೀಜಿ ರಚಿಸಿದ ‘ಹೀಗಿರಲಿ ನಮ್ಮ ಬದುಕು’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಬಸವಲಿಂಗ ಶಿವಾಚಾರ್ಯರ ಸ್ವಾಮೀಜಿ, ಸುಣಧೋಳಿಯ ಜಡಿಸಿದ್ಧೇಶ್ವರ ವಿರಕ್ತ ಮಠದ ಶಿವಾನಂದ ಸ್ವಾಮೀಜಿ, ಗುಡುಗುಂಟಿಯ ಸದಾನಂದ ಶಿವಾಚಾರ್ಯ ಮತ್ತು ಬೆಳ್ಳೇರಿಯ ಬಸವಾನಂದ ಶರಣರು, ವಿನೋದ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಶಿವಯೋಗಿ ಸುರಕೋಡ, ಈರಣ್ಣ ಅಳವುಂಡಿ ಇದ್ದರು. ಅಶೋಕ ಬೀಳಗಿ ಪ್ರಾರ್ಥಿಸಿದರು. ಭಾಗ್ಯಶ್ರೀ, ರಾಜಶ್ರೀ ನೃತ್ಯ ಪ್ರದರ್ಶನ ಮಾಡಿದರು. ಗುರುಸಿದ್ಧೇಶ್ವರ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಿರೀಶ ಮುತ್ತೂರ ನಿರೂಪಿಸಿದರು.