ಮೂರ್ತಿಯು 10 ಅಡಿ 1 ಇಂಚು ಎತ್ತರವಿದ್ದು, ಕಮಲ ಪೀಠದಿಂದ ಒಟ್ಟು 12 ಅಡಿ ಎತ್ತರದ ಮೂರ್ತಿಯಾಗಿದೆ. ಈ ಮೂರ್ತಿಯನ್ನು ದಾನಿ ಮಹಾವೀರ ಪ್ರಸಾದ್ ಜೈನ್ ಅವರು ತಮ್ಮ ತಂದೆಯ ಇಚ್ಛೆಯಂತೆ ಶ್ರವಣಬೆಳಗೊಳದಲ್ಲಿ ಪ್ರತಿಷ್ಠಾಪಿಸಲಿದ್ದಾರೆ. ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯನ್ನೇ ಇದು ಹೋಲುತ್ತಿದ್ದು, ಕಲಾವಿದರು ಇದರ ಕೆತ್ತನೆಗೆ 6 ತಿಂಗಳು ಕಾಲಾವಧಿ ತೆಗೆದುಕೊಂಡಿದ್ದಾರೆ.