ಶಿವಗಂಗಾ ಜಿಲ್ಲೆಯ ಸಿರವಯಾಲ್ ಎಂಬಲ್ಲಿ ನಡೆದ ಮಂಜವಿರಟ್ಟು (ಜಲ್ಲಿಕಟ್ಟುಗಿಂತ ಕೊಂಚ ಭಿನ್ನವಾದ ಹೋರಿ ಬೆದರಿಸುವ ಸ್ಪರ್ಧೆ) ನೋಡಲು ಬಂದಿದ್ದ ಜನರ ಗುಂಪಿನ ಕಡೆಗೆ ಗೂಳಿ ನುಗ್ಗಿದಾಗ ಇಬ್ಬರು ಮೃತಪಟ್ಟರು. ತಿರುಚಿನಾಪಳ್ಳಿ ಜಿಲ್ಲೆಯ ಆವರಂಗಾಡು ಎಂಬಲ್ಲಿ ಜಲ್ಲಿಕಟ್ಟು ನೋಡಲು ಬಂದಿದ್ದ ಸೋಲೈ ಪಾಂಡ್ಯನ್ ಎಂಬುವವರು ಹೋರಿ ತಿವಿದು ಸಾವನ್ನಪ್ಪಿದ್ದಾರೆ.