‘ಮಹದಾಯಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ಗೋವಾ, ಮಹಾರಾಷ್ಟ್ರ, ಕರ್ನಾಟಕದ ಮುಖ್ಯಮಂತ್ರಿಗಳಿಗೆ ನ್ಯಾಯಮಂಡಳಿಯು ಸಲಹೆ ನೀಡಿದೆ. ಈ ವಿಚಾರದಲ್ಲಿ ಬಿಜೆಪಿ ಆಡಳಿತದಲ್ಲಿರುವ ಗೋವಾ ಮತ್ತು ಮಹಾರಾಷ್ಟ್ರದವರು ಸಹಕರಿಸುತ್ತಿಲ್ಲ. ಅವರಿಗೆ ಸಂಧಾನ ಇಷ್ಟವಿಲ್ಲದಿದ್ದರೆ ಅದನ್ನಾದರೂ ಹೇಳಲಿ. ಮುಂದಿನ ತೀರ್ಮಾನ ನ್ಯಾಯಮಂಡಳಿ ಕೈಗೊಳ್ಳುತ್ತದೆ’ ಎಂದು ಹೇಳಿದರು.