‘ದೆಹಲಿ ಐಐಟಿ, ಪ್ರೊ. ಗೋಸಾಯಿ ಹಾಗೂ ಕರ್ನಾಟಕ ಸರ್ಕಾರದ ನಡುವೆ ಈ ಸಂಬಂಧ ತ್ರಿಪಕ್ಷೀಯ ಒಪ್ಪಂದ ನಡೆದಿದೆ. ಒಪ್ಪಂದದ ಪ್ರಕಾರ, ಶುಲ್ಕದ ಒಂದು ಭಾಗ ದೆಹಲಿ ಐಐಟಿಗೆ ಸಂದಾಯವಾಗುತ್ತದೆ. ತಜ್ಞ ಸಾಕ್ಷಿದಾರರಿಗೆ ಶುಲ್ಕ ನೀಡಿಕೆಯು ಭಾರತವಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳ
ಲ್ಲಿಯೂ ಕಾನೂನುಬದ್ಧ ನಡೆ.ಅಗತ್ಯ ಬಿದ್ದರೆ ನ್ಯಾಯಮಂಡಳಿಗೆ ಈ ಸಂಗತಿಯನ್ನು ಅರಿಕೆ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.