ಬೆಂಗಳೂರು: ಜಲಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆಯ 3ನೇ ಹಂತದಲ್ಲಿ ತುರ್ತು ಕಾಮಗಾರಿಗಳನ್ನು ಇದೇ 17 ರಂದು ಕೈಗೊಂಡಿದೆ. ಹೀಗಾಗಿ, ಶ್ರೀನಗರ, ಲಕ್ಷ್ಮಿಪುರ, ರಾಘವೇಂದ್ರ ಬ್ಲಾಕ್, ಗವಿಪುರ, ಕಾಳಿದಾಸ ಬಡಾವಣೆ, ಸಂಕೇನಹಳ್ಳಿ ಹಾಗೂ ಸುತ್ತಲಿನ
ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನೀರು ಪೂರೈಕೆಯಲ್ಲಿಭಾಗಶಃ ವ್ಯತ್ಯಯ ಉಂಟಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.