ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ತಿಂಗಳು 27ರಂದು ನನ್ನ ಮೊಬೈಲ್ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ತನ್ನನ್ನು ರವಿಪೂಜಾರಿ ಎಂದು ಹೇಳಿಕೊಂಡರು. ₹ 10 ಕೋಟಿ ರೂಪಾಯಿ ನೀಡಬೇಕು. ಕೊಡದಿದ್ದರೆ ನೀನು ಮತ್ತು ನಿನ್ನ ಕುಟುಂಬದವರು ಬದುಕಿ ಉಳಿಯುವುದಿಲ್ಲ ಎಂದು ಬೆದರಿಕೆ ಹಾಕಿದ್ದರು’ ಎಂದು ತಿಳಿಸಿದರು.