ರಾಂಪುರದ ಬಕ್ಕಪ್ಪ ಅವರ ‘ಕಡೀತ ಹಾವು ಕಡೀತ, ಬೇವು ತಿಂದ ಬಾಯಿ ಬೆಲ್ಲದಂತಾಗಿತ್ತು’, ಅಮೀರ್ ಖುಶ್ರೊ ಅವರ ‘ಮನ್ಕುಂತೊ ಮೌಲಾ’ ಸೂಫಿ ಹಾಡಿದರು. ಬತ್ತಲೇಶ್ವರ ಅವರ ‘ಹಾರಿತೋ ಹಂಸ ಹಾರಿತೋ’, ಕಡಕೊಳ ಮಡಿವಾಳಪ್ಪ ಅವರ ‘ತನ್ನ ತಾನು ತಿಳಿದ ಮ್ಯಾಲ ಇನ್ನೇನು ಇನ್ನೇನು, ತನ್ನಂತೆ ಪರರ ಜೀವ ಮನ್ನಿಸಿ ಮೂಕಾದ ಮೇಲೆ ಇನ್ನೇನು ಇನ್ನೇನು...’, ನಿಜಗುಣ ಶಿವಯೋಗಿಗಳ ‘ಕೋಗಿಲೆ ಚೆಲ್ವ ಕೋಗಿಲೆ’, ಸರ್ಪಭೂಷಣ ಶಿವಯೋಗಿಗಳ ‘ಅನುಭಾವದ ಅಡಿಗೆಯ ಮಾಡಿ, ಅದಕ್ಕನುಭಾವಿಗಳು ಬಂದು, ನೀವೆಲ್ಲ ಕೂಡಿ, ತನುವೆಂಬ ಭಾಂಡವ ತೊಳೆದು, ಕೆಟ್ಟ ಮನದ ಜಂಜಡವೆಂಬ ಮುಸುರೆಯ ತೊಳೆದು...’ ಹಾಡಿದಾಗ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.