‘ಆದರೆ ತವರು ಮನೆಯಲ್ಲೂ ಕೂಡ ತಾಯಿ ತಾಹಿರಾ ಮತ್ತು ತಂಗಿ ರುಬಿನಾ ಮನೆಯಿಂದ ಹೊರಹೋಗುವಂತೆ ಕಿರುಕುಳ ನೀಡಿದರು. ಐದೂವರೆ ವರ್ಷದ ನನ್ನ ಮೊದಲ ಮಗ ಆಯಾನ್ ಇಲ್ಲಿಯೇ ಉಳಿದುಕೊಂಡು ಶಾಲೆಗೆ ಹೋಗುತ್ತಿದ್ದು, ಆತನ ಶಿಕ್ಷಣಕ್ಕೆ ₹ 10 ಸಾವಿರ ನೀಡುವಂತೆ ಒತ್ತಾಯಿಸಿದರು. ಇದರಿಂದ ಬೇರೆ ದಾರಿಗಾಣದೇ ರೈಲು ನಿಲ್ದಾಣಕ್ಕೆ ಬಂದಿದ್ದೇನೆ’ ಎಂದು ಅವರು ವಿವರಿಸಿದರು. ದಿಕ್ಕೇ ತೋಚದಂತಾಗಿದೆ. ಏನು ಮಾಡಬೇಕೆಂದು ಸಂಕಷ್ಟ ತೋಡಿಕೊಂಡರು.