ಯುದ್ಧವಿಮಾನದಲ್ಲಿ (ಮಿಗ್–21) ಹಾರಾಟ ನಡೆಸಿದ ಏಕೈಕ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆ ಜಾರ್ಜ್ ಫರ್ನಾಂಡಿಸ್ ಅವರದ್ದಾಗಿತ್ತು. ಸುಖೋಯ್–30 ಎಂಕೆಐನಲ್ಲಿ ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಉದ್ಯಮಿ ರತನ್ ಟಾಟಾ ಹಾರಾಟ ನಡೆಸಿದ್ದರು. ಹಾರಾಟಕ್ಕೂ ಮುನ್ನ ನಿರ್ಮಲಾ ಅವರು ಪೈಲಟ್ಗಳು, ಇತರ ಸಿಬ್ಬಂದಿಯನ್ನು ಭೇಟಿಯಾದರು. ನಂತರ ಸುಖೋಯ್–30 ಯುದ್ಧವಿಮಾನದ ಬಗ್ಗೆ ತಜ್ಞರು ಮಾಹಿತಿ ನೀಡಿದರು.