ಸಿ.ವಿ.ರಾಮನ್ ನಗರ ಕ್ಷೇತ್ರದ ಜಿ.ಎಂ.ಪಾಳ್ಯ ವಾರ್ಡ್ನ ಕಾವೇರಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಗೋವಿಂದರಾಜು, ‘ಬಡಾವಣೆಯಲ್ಲಿ ಮೈದಾನವಿಲ್ಲ. ಮಕ್ಕಳು ರಸ್ತೆಗಳಲ್ಲೇ ಆಟವಾಡಬೇಕಾದ ಪರಿಸ್ಥಿತಿ ಇದೆ. ಆಡುವಾಗ ಮಕ್ಕಳು ಅಪಘಾತಕ್ಕೀಡಾಗುವ ಅಪಾಯ ಇದೆ. ಶೀಘ್ರವೇ ಆಟದ ಮೈದಾನದ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.