ಸೂರ್ಯ ಮಾತು ಬಾರದವ, ತಾಯಿ-ತಂದೆಯನ್ನು ಕಳೆದುಕೊಂಡ ಅನಾಥ. ಅಕ್ಕನ ಆಶ್ರಯದಲ್ಲಿ ಬದುಕುವ ಈತನಿಗೆ ತಾನು ರಚಿಸುವ ಚಿತ್ರಗಳೇ ಮಾತು ಇದ್ದಂತೆ. ತನ್ನ ಎಲ್ಲ ಭಾವನೆಗಳನ್ನೂ ಚಿತ್ರಗಳ ಮೂಲಕ ಆತ ಅಭಿವ್ಯಕ್ತಿಸುತ್ತಾನೆ. ಅಕ್ಕ ಕಾವೇರಿ ಈತನ ಬೆಂಬಲಕ್ಕಿರುತ್ತಾಳೆ. ಈತ ದಲಿತರ ಬವಣೆ, ರೈತರ ಕಷ್ಟಗಳನ್ನು ಚಿತ್ರದಲ್ಲಿ ಹೇಳುತ್ತಾನೆ. ಆದರೆ ಈ ಚಿತ್ರಗಳಿಗೆ ಮಾರುಕಟ್ಟೆಯೇ ಇರುವುದಿಲ್ಲ.