ಅದಿತಿ ಅಶೋಕ್ ಮತ್ತು ಸ್ಫೂರ್ತಿ ಅಶೋಕ್ ಅವರ ರಂಗಾರ್ಪಣಂ ನೃತ್ಯ ಪ್ರದರ್ಶನ ಕುಮಾರಸ್ವಾಮಿ ಲೇಔಟ್ನಲ್ಲಿರುವ ದಯಾನಂದ ಸಾಗರ್ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಇವರು ನಾಟ್ಯಾಂಜಲಿ ನೃತ್ಯ ಶಾಲೆಯ ಸಂಸ್ಥಾಪಕ ಅಶೋಕ್ ಕುಮಾರ್ ಅವರ ಪುತ್ರಿಯರು. ಆರಭಿ ರಾಗದ ಗಣೇಶ ಸ್ಥುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಶ್ರೀವತ್ಸವ ಗಾಯನ, ಗುರುಮೂರ್ತಿ ಮೃದಂಗ, ಪ್ರದೇಶಾಚಾರ್ ಪಿಟೀಲು, ಕಾರ್ತಿಕ್ ಸಾತವಳ್ಳಿ ಕೊಳಲು, ಪ್ರಸನ್ನ ಖಂಜಿರ, ಸುಮಾರಾಣಿ ಸಿತಾರ್ ವಾದನ ಮಾಡಿದರು.