ಚಿಕ್ಕದೇವರಾಜ ಒಡೆಯರ್ ಕಲ್ಯಾಣಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದವರು ವೈರಾಗ್ಯ ಮೂರ್ತಿ ಪ್ರಸಿದ್ಧ ಗೀತೆಯಾದ ‘ಬಾಹುಬಲಿ ಸ್ವಾಮಿ ಜಗಕ್ಕೆಲ್ಲ ಸ್ವಾಮಿ’ ಮತ್ತು ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ರಚಿಸಿದ ‘ವಿಸಟ್ಟ ಕಂದೊಟ್ಟ ದಲಾಣು ಯಾರಂ‘ ಎಂಬ ಗೊಮ್ಮಟ ಸ್ತುತಿ ಮೊಳಗಿಸಿದರು. ಸಾಂಗ್ಲಿಯ ಕುಬೇರ್ ಚೌಗಲೆ ತಂಡ ಸಂಗೀತ ನೀಡಿತು.