‘ಲೋಕಾಯುಕ್ತ ಕೇವಲ ದೂರು ಸ್ವೀಕರಿಸುವ ಸಂಸ್ಥೆಯಾಗಿ ಉಳಿದಿದೆ ಎಂಬ ಆರೋಪ ಸುಳ್ಳು. ಭ್ರಷ್ಚಾಚಾರ ನಿಗ್ರಹಕ್ಕೆ ಕಾನೂನಿನ ಅಡಿ ಸಿಗುವ ಸಂಪೂರ್ಣ ಅಧಿಕಾರ ಬಳಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹಲವು ಪ್ರಕರಣಗಳಲ್ಲಿ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಶಿಕ್ಷೆಗೆ ಶಿಫಾರಸು ಮಾಡಿದ್ದೇವೆ. ಕೆಲವು ಪ್ರಕರಣದಲ್ಲಿ ಸರ್ಕಾರ ಸ್ಪಂದಿಸಿದೆ, ಕೆಲ ಪ್ರಕರಣಗಳಲ್ಲಿ ಸ್ಪಂದಿಸಿಲ್ಲ. ಸಂಸ್ಥೆಯಲ್ಲಿ ದಾಖಲಾದ ಎಲ್ಲಾ ಪ್ರಕರಣಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಲಾಗುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.