ಕನ್ನಡ ಚಳವಳಿಯ ಸವಾಲುಗಳು, ರಾಜಾಜಿನಗರದಲ್ಲಿ ಕನ್ನಡ ಚಳವಳಿ ಬೆಳೆದು ಬಂದ ದಾರಿ ಮುಂತಾದ ವಿಷಯಗಳ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಹಿತಿ ಡಾ.ಎಲ್.ಹನುಮಂತಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಗಳನ್ನು ಆನ್ಲೈನ್ನಲ್ಲೂ (dristilive.com) ವೀಕ್ಷಿಸಬಹುದು ಎಂದರು. ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ ಉಪಸ್ಥಿತರಿದ್ದರು.