ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎನ್.ವಿ. ರಮಣ, ಡಿ.ವೈ. ಚಂದ್ರಚೂಡ ಮತ್ತು ಯು.ಯು. ಲಲಿತ್ ಅವರೂ ಈ ಮಾತುಕತೆಯ ಸಂದರ್ಭದಲ್ಲಿ ಹಾಜರಿದ್ದರು ಎಂದು ಮೂಲಗಳು ಹೇಳಿವೆ. ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಇದೇ 12ರಂದು ಮಾಧ್ಯಮಗೋಷ್ಠಿ ನಡೆಸಿ ತಮ್ಮ ಅತೃಪ್ತಿ ಹೊರಹಾಕಿದ ಬಳಿಕ ಅವರು ಮತ್ತು ಸಿಜೆಐ ನಡುವೆ ನಡೆದ ಎರಡನೇ ಸಭೆ ಇದು.