ಬೆಂಗಳೂರು: ಮಾಜಿ ಮೇಯರ್ ಕೆ.ಎಚ್.ಎನ್.ಸಿಂಹ (79) ಗುರುವಾರ ಬೆಳಿಗ್ಗೆ 8.30ಕ್ಕೆ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪತ್ನಿ ಸರೋಜಾದೇವಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.
ಚಾಮರಾಜಪೇಟೆಯಲ್ಲಿರುವ ಟಿ.ಆರ್.ಮಿಲ್ ಚಿತಾಗಾರದಲ್ಲಿ ಶುಕ್ರವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ.
1998-99ನೇ ಸಾಲಿನಲ್ಲಿ ಮೇಯರ್ ಅವರು ಆಗಿದ್ದರು. ಮೈಸೂರು ರಸ್ತೆಯ ಶಿರಸಿ ವೃತ್ತದಿಂದ ಪುರಭವನದವರೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಅವರ ಅವಧಿಯಲ್ಲೇ ಆರಂಭಿಸಲಾಗಿತ್ತು. ಪೌರಕಾರ್ಮಿಕರಿಗೂ ಬಡ್ತಿ ಸೌಲಭ್ಯ ಕಲ್ಪಿಸಿದ್ದರು.
ಅವರ ಗೌರವಾರ್ಥ ಪಾಲಿಕೆ ಕಚೇರಿಗಳಿಗೆ (ತುರ್ತು ಸೇವೆ ಹೊರತುಪಡಿಸಿ) ರಜೆ ನೀಡಲಾಯಿತು.