ಓಂಕಾರೇಶ್ವರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಗಾಗಿ ಲೋಹ ಸಂಗ್ರಹಿಸುವ ಉದ್ದೇಶದ ರಾಜ್ಯವ್ಯಾಪಿ ಯಾತ್ರೆಯನ್ನು ಸೋಮವಾರ ಆಯೋಜಿಸಲಾಗಿತ್ತು. ಈ ವೇಳೆ ಸಂಜಾರ್ ಅವರು ಭೋಪಾಲ್ ಕೇಂದ್ರ ಕ್ಷೇತ್ರದ ಶಾಸಕ ಸುರೇಂದ್ರನಾಥ್ ಸಿಂಗ್ ಅವರೊಂದಿಗೆ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದ್ದರು. ವ್ಯಕ್ತಿಯೊಬ್ಬರು ಈ ಛಾಯಾಚಿತ್ರವನ್ನು ತೆಗೆದು ಸಂಚಾರ ಪೊಲೀಸರ ವಾಟ್ಸ್ಆ್ಯಪ್ಗೆ ಕಳುಹಿಸಿದ್ದರು.