‘ಅಪ್ಪ ಊರಿಗೆ ಹೋಗಿದ್ದ. ಅವ್ವ ಕೆಲಸಕ್ಕೆ ಹೋಗಿದ್ಲು. ತಂಗಿ, ಸಾಲಿಗೆ ಹೋದಾಕಿ ಇನ್ನೂ ಬಂದಿದ್ದಿಲ್ಲ. ನಾನು ಹೊಲದಾಗ ಆಡು ಮೇಯಿಸಾಕ
ತ್ತಿದ್ದೆ. ಮುಖಕ್ಕೆ ಅರಿಬಿ ಸುತ್ತಿಕೊಂಡವ ಒಬ್ಬಂವಾ ನನ್ನ ಹತ್ರ ಬಂದು, ಕಾಕಾ ಮೊಬೈಲ್ ಬಿಟ್ಟು ಹೋಗ್ಯಾನಂತ; ಕೊಡ ಬಾ ಅಂತ ಕರದ. ಅದಕ್ಕ ನಾನು, ಯಾರ್ ನೀನು? ಮಾರಿ ಮ್ಯಾಲಿನ ಅರಿಬಿ ತಗಿ ಅಂದೆ. ಅದಕ್ಕ ಅಂವ, ಬ್ಯಾನಿ ಆಗೇತಿ; ತಗ್ಯಾಕ ಬರಂಗಿಲ್ಲ ಅಂದ. ‘ನಾ ನಿನ್ನ ಕಾಕಾನ ಮಗಾನ. ನೀ ನೋಡಿಲ್ಲ’ ಅಂದ. ನಂಬಿ ಪತ್ರಾಸ ಶೆಡ್ ಹತ್ರ ಹೋದೆ. ಅಲ್ಲೆ ಅಂಜುಟಗಿಯ ಕಂಟೆಪ್ಪ ಕೋಣೆಗೋಳ ಕುಂತಿದ್ದ. ಜತಿಗೆ, ಮಾರಿಗೆ ಅರಿಬಿ ಸುತ್ತಗೊಂಡವ್ರು ಇನ್ನೂ ಇಬ್ಬರಿದ್ರು. ಕಂಟೆಪ್ಪ ಕುಡ್ಯಾಕ ನೀರ್ ಕೇಳ್ದ. ಕೊಟ್ಟೆ. ಚಾ ಮಾಡು ಅಂದ; ಮಾಡಲ್ಲ ಅಂದೆ. ನಮ್ಮ ಹುಡುಗನ್ನ ಲಗ್ನಾ ಆಗು ಅಂದ. ನಾ ಆಗಲ್ಲ ಅಂದೆ. ಹಂಗ ಅನತಿದ್ದಂಗ... ಬಾಯಾಗ ಅರಿಬಿ ತುರುಕಿ ಶೆಡ್ ಒಳಗ ದೂಕಿದ’....
ಎಂದು ಬಾಲಕಿ, ಕರಾಳ ದಿನ ನಡೆದುದನ್ನು ಭಯದಲ್ಲೇ ವಿವರಿಸಲು ಮುಂದಾದಳು.