ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಜಿಪಿ ‘ಆಫ್‌ ದ ರೆಕಾರ್ಡ್‌’ ವೈರಲ್‌!

ವಿಜಯಪುರದ ದಲಿತ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣ
Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರದ ದಲಿತ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ನ್ಯೂಸ್‌ 91 ಸಂಪಾದಕ’ ಎಂದು ಪರಿಚಯಿಸಿಕೊಂಡ ಬಿ.ಆರ್.ಭಾಸ್ಕರ ಪ್ರಸಾದ್‌ ಎಂಬುವವರ ಜತೆ, ಆಗ ಉತ್ತರ ವಲಯ ಐಜಿಪಿಯಾಗಿದ್ದ ಡಾ.ಕೆ.ರಾಮಚಂದ್ರರಾವ್‌ ನಡೆಸಿದ್ದಾರೆ ಎನ್ನಲಾದ ಮೊಬೈಲ್‌ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ವೇದಿಕೆ’ಯ ಸಂಚಾಲಕ ಆಗಿರುವ ಭಾಸ್ಕರ ಪ್ರಸಾದ್ ಐಜಿಪಿ ಜೊತೆ ನಡೆಸಿದ್ದಾರೆ ಎನ್ನಲಾದ ಸಂಭಾಷಣೆ ಬಗ್ಗೆ ‘ಸಮಾಚಾರ್ ಡಾಟ್‌ ಕಾಂ’ ವಿಸ್ತೃತ ವರದಿ ಪ್ರಕಟಿಸಿದೆ. ಇದರ ಜೊತೆಗೆ 15.52 ನಿಮಿಷದ ಆಡಿಯೊ ಕ್ಲಿಪ್ಪಿಂಗ್‌ ಕೂಡ ಇದೆ.
ಆದರೆ ಈ ಧ್ವನಿ ರಾಮಚಂದ್ರರಾವ್ ಅವರದ್ದೇ ಎನ್ನುವುದು ಖಚಿತವಾಗಿಲ್ಲ.

</p><p>ಭಾಸ್ಕರ ಪ್ರಸಾದ್‌, ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಾಗಿ ರಾಮಚಂದ್ರರಾವ್‌ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸುತ್ತಾರೆ. ‘ಆಫ್‌ ದ ರೆಕಾರ್ಡ್‌’ ಎಂದು ಐಜಿಪಿ ಮಾತನಾಡಿದ್ದಾರೆ ಎನ್ನಲಾಗಿದೆ.</p><p>ಆಡಿಯೊದಲ್ಲಿ ಏನಿದೆ: ‘ವಿದ್ಯಾರ್ಥಿನಿ, ಸಾವಿಗೂ ಮುನ್ನ ಗರ್ಭಪಾತ ಮಾಡಿಸಿಕೊಂಡಿದ್ದಳು. ಕೆಲ ಹುಡುಗರ ಜತೆ ಸಂಬಂಧ ಹೊಂದಿದ್ದ ಆಕೆ ಸಾಯುವ ದಿನದಂದೂ ಸ್ನೇಹಿತನೊಬ್ಬನ ಜತೆ ಲೈಂಗಿಕ ಸಂಪರ್ಕದಲ್ಲಿದ್ದಳು. ಈ ವೇಳೆ ತೀವ್ರ ರಕ್ತಸ್ರಾವ<br/>&#13; ಕ್ಕೀಡಾಗಿ ಮೃತಪಟ್ಟಿದ್ದಾಳೆ. ಘಟನೆ ನಡೆದ ಸ್ಥಳದಲ್ಲಿ ಕಾಂಡೋಮ್‌ ದೊರಕಿವೆ. ಈಚೆಗಷ್ಟೇ ಗರ್ಭ ಧರಿಸಿದ್ದ ಆಕೆ, ಅದನ್ನು ಕಳೆದುಕೊಳ್ಳಲು ಮಾತ್ರೆ ಸೇವಿಸಿದ್ದಳು. ಬ್ಲೀಡಿಂಗ್‌ ನಿಂತಿರಲಿಲ್ಲ. ಆದರೂ ಸ್ನೇಹಿತನನ್ನು ಕೋಡ್‌ ವರ್ಡ್‌ನಲ್ಲಿ ಕರೆದಿದ್ದಾಳೆ. ಶಾಲೆಯಿಂದ ತನ್ನ ಸ್ನೇಹಿತೆ ಜತೆಗೆ ಒಂದು ‘ಆಂಟಿ ಸ್ಪಾಟ್‌’ಗೆ ಬಂದಿದ್ದಾಳೆ. ಹಿಂದಿನ ಬಾಗಿಲಿನಿಂದ ಒಬ್ಬಳೇ ಒಳ ಹೋಗಿ ಸ್ನೇಹಿತನ ಜತೆ ಸೆಕ್ಸ್‌ ಮಾಡಿದ್ದಾಳೆ. ಆ ನಂತರ ಅಲ್ಲೇ ಕುಸಿದು ಬಿದ್ದಿದ್ದಾಳೆ. ಹೊರಗೆ ಕಾಯುತ್ತಿದ್ದ ಆಕೆಯ ಸ್ನೇಹಿತೆ ಹಾಗೂ ಮನೆಯ ಆಂಟಿ, ಒಳ ಹೋಗಿ ಆಕೆಗೆ ಬಟ್ಟೆ ಹಾಕಿದ್ದಾರೆ. ಬಾಲಕಿಯ ನಡತೆ ಸರಿ ಇರಲಿಲ್ಲ...’  ಹೀಗೆ ಮಾತು ಮುಂದುವರಿಯುತ್ತದೆ.</p><p>[related]</p><p><strong>ಕರೆ ಸ್ವೀಕರಿಸಲಿಲ್ಲ:</strong> ‘ಪ್ರಜಾವಾಣಿ’, ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಂಭಾಷಣೆ ನಡೆಸಿದ ಇಬ್ಬರಿಗೂ ಕರೆ ಮಾಡಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.</p><p>ರಾಮಚಂದ್ರ ರಾವ್ ಅವರು ಸದ್ಯ ಕುಂದು ಕೊರತೆ ಮತ್ತು ಮಾನವ ಹಕ್ಕುಗಳ ಘಟಕದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರಾಗಿದ್ದಾರೆ.</p><p><strong>ವರದಿ ನೀಡಲು ಡಿಜಿಪಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚನೆ</strong></p><p>ಬೆಂಗಳೂರು: ‘ವಿಜಯಪುರದಲ್ಲಿ ದಲಿತ ಬಾಲಕಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಮುಖಂಡರೊಬ್ಬರ ಜತೆ ಉತ್ತರ ವಲಯ ಐಜಿಪಿ ರಾಮಚಂದ್ರ ರಾವ್ ನಡೆಸಿದ ಮಾತುಕತೆ ಕುರಿತು ವರದಿ ನೀಡುವಂತೆ ಡಿಜಿಪಿ ನೀಲಮಣಿ ರಾಜು ಅವರಿಗೆ ಸೂಚಿಸಿದ್ದೇನೆ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.</p><p>ರಾಮಚಂದ್ರರಾವ್ ಅವರು ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಜತೆ ಆಡಿರುವ ಮಾತುಗಳು ವೈರಲ್ ಆಗಿರುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ.</p><p>‘ಸಂಭಾಷಣೆಯ ವಿವರ ಹಾಗೂ ಸತ್ಯಾಸತ್ಯತೆ ಪರಿಶೀಲಿಸಬೇಕಿದೆ. ಈ ಕಾರಣಕ್ಕೆ ಡಿಜಿಪಿ ಅವರಿಗೆ ವರದಿ ನೀಡುವಂತೆ ಕೇಳಿದ್ದೇನೆ. ವರದಿ ಬಂದ ಬಳಿಕ ಸತ್ಯ ಗೊತ್ತಾಗಲಿದೆ’ ಎಂದರು.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT