ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಬಾವುಟಕ್ಕೆ ಸುಮಾರು 50 ವರ್ಷಗಳ ಇತಿಹಾಸವಿದೆ. ಪ್ರತ್ಯೇಕ ಬಾವುಟ ರಚನೆಗೆ ಸಮಿತಿ ರಚಿಸಿರುವುದರ ಹಿಂದೆ ದೊಡ್ಡ ಪಿತೂರಿ ಅಡಗಿದೆ. ಸರ್ಕಾರ ಯಾರನ್ನು ಕೇಳಿ ಸಮಿತಿ ರಚಿಸಿತು. ಕನ್ನಡ ಸಾಹಿತ್ಯ ಪರಿಷತ್ತು ಹೇಗೆ ಸಮಿತಿಯಲ್ಲಿ ಸೇರ್ಪಡೆಯಾಯಿತು. ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ಗೆ ಕನ್ನಡ ಬಾವುಟದ ಇತಿಹಾಸ ಏನು ಗೊತ್ತು’ ಎಂದು ಪ್ರಶ್ನಿಸಿದರು.