ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ, ‘ವರ್ತಮಾನದ ವಿದ್ಯಮಾನಗಳಿಗೆ ಪತ್ರಕರ್ತೆಯರು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬ ಬಗ್ಗೆ ಜಗತ್ತಿನೆಲ್ಲೆಡೆ ಚರ್ಚೆಯಾಗುತ್ತಿದೆ. 90ರ ನಂತರದಲ್ಲಿ ಪತ್ರಿಕಾ ರಂಗದ ಸ್ವರೂಪ ಬದಲಾಗಿದೆ. ಪತ್ರಕರ್ತೆಯರು ಏನಿದ್ದರೂ ಉತ್ಸವ, ಸಂಭ್ರಮ, ಜೀವನ ಶೈಲಿಯ ಕುರಿತು ಬರೆಯಲಷ್ಟೇ ಸೀಮಿತ ಎಂಬಂತಾಗಿದೆ. ಯುವ ಪತ್ರಕರ್ತೆಯರು ರಾಜಕೀಯ ಪ್ರಜ್ಞೆ, ಸಾಮಾಜಿಕ ಸಂವೇದನೆ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ರಾಜಕೀಯ ವರದಿಗಾರರು ಹೇಗೆ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಹಿರಿಯ ಪತ್ರಕರ್ತೆ ಆಶಾ ಕೃಷ್ಣಸ್ವಾಮಿ ವಿವರಿಸಿದರು.