‘ಸಾಹಿತ್ಯದಲ್ಲಿ ಸಕ್ರಿಯ ರಾಜಕಾರಣ ಪರೋಕ್ಷ ಪ್ರವೇಶ ಪಡೆಯುತ್ತಿದೆ. ಇದಕ್ಕೊಂದು ಸ್ಪಷ್ಟ ಉದಾಹರಣೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚುನಾವಣಾ ಪ್ರಚಾರ ಭಾಷಣವಾದ ಸಮ್ಮೇಳನಾಧ್ಯಕ್ಷರ ನುಡಿ. ಇದು ನೇರವಾಗಿ ಸಾಹಿತ್ಯ ಸಂಭ್ರಮಕ್ಕೆ ಸಂಬಂಧಿಸದಿದ್ದರೂ ಈ ವಿದ್ಯಮಾನ ಅನೇಕರ ಆತಂಕಕ್ಕೆ ಕಾರಣವಾಗಿದೆ’ ಎಂದು ಗಿರಡ್ಡಿ ಗೋವಿಂದರಾಜ ತಮ್ಮ ಆಶಯ ಭಾಷಣದಲ್ಲಿ ಹೇಳಿದರು.