ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಮ್ಮ ಭಾಷಣದಲ್ಲಿ ಮನುಷ್ಯನ ದುರಾಸೆಯಿಂದ ಪ್ರಕೃತಿ ಕಲುಷಿತಗೊಳ್ಳುತ್ತಿದ್ದು, ಅದು ನಮ್ಮ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಕ್ಕೆ ಉದಾಹರಣೆ ಇಲ್ಲೇ ಇದ್ದಾರೆ ಎಂದು ಕಾರ್ನಾಡರನ್ನು ತೋರಿಸಿದರು. ’ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ’ ಎಂದು ಕಾರ್ನಾಡರು ನರಹಳ್ಳಿಯವರ ಮಾತನ್ನು ತಕ್ಷಣವೇ ತಿದ್ದಿದರು.