‘ಬಿಆರ್ಸಿ ಕೇಂದ್ರದಲ್ಲಿ ಶಿಕ್ಷಕರಿಗೆ ಬೊಂಬೆ ಪ್ರದರ್ಶನದ ತರಬೇತಿ ನೀಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ವಿಷಯವಾರು ಚಿತ್ರ ಮತ್ತು ಬೊಂಬೆ ಪ್ರದರ್ಶನದ ಬಗ್ಗೆ ತಿಳಿಸಲಾಗುತ್ತದೆ. ನಂತರ ಬೋಧಕರು ತಮ್ಮ ಅನುಭವದ ಮೂಲಕ ಮಕ್ಕಳ ಕಲಿಕೆಗೆ ಪೂರಕವಾಗಿ ಹತ್ತಾರು ವಿಷಯಗಳ ಬಗ್ಗೆ ಚಿತ್ರಕಲೆ, ಮುಖವಾಡ, ಗಣಿತ ಸೂತ್ರಗಳನ್ನು ವೈವಿಧ್ಯಮಯವಾಗಿ ರಚಿಸಬಹುದು’ ಎನ್ನುತ್ತಾರೆ ಶಿಕ್ಷಕಿ ಎಲ್. ಸುಜಾತ.