ತ್ಯಾಗಿ ನಗರ ಪ್ರವೇಶದ ಕಾರ್ಯ ಕ್ರಮಕ್ಕೂ ಮುನ್ನ ಮಠದ ಬಳಿ ವರ್ಧಮಾನ ಸಾಗರ ಮಹಾರಾಜರ ಮತ್ತು ಸಂಘಸ್ಥ ತ್ಯಾಗಿಗಳ ಪಾದ ಪೂಜೆ ನೆರವೇರಿಸಲಾಯಿತು. ನಂತರ ಮಂಗಳ ವಾದ್ಯ, ಮೈಸೂರು ಬ್ಯಾಂಡ್ಸೆಟ್, ಕಳಶ ಹೊತ್ತ ಮಹಿಳೆಯರು, ಧರ್ಮ ಧ್ವಜ ಹಿಡಿದ ಬಾಲಕರು ಅಪಾರ ಭಕ್ತ ಸಮೂಹ ಮೆರವಣಿಗೆಯೊಂದಿಗೆ ತ್ಯಾಗಿ ನಗರ ಪ್ರವೇಶ ಮಾಡಿದ ತ್ಯಾಗಿ ವೃಂದಕ್ಕೆ ಪುಷ್ಪ ಅರ್ಪಿಸಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ವಾಗತಿಸಿದರು.