ಪೊಲೀಸರು ಲಾಠಿಗಳನ್ನು ಅಡ್ಡ ಹಿಡಿದು, ಪ್ರತಿಭಟನಾಕಾರರ ಗುಂಪು ಸಚಿವರತ್ತ ಬರದಂತೆ ತಡೆದು, ಗುಂಪು ಚದುರಿಸಿದರು. ರಸ್ತೆಯ ಒಂದು ಬದಿ ಗುಂಪನ್ನು ತಡೆ ಹಿಡಿಯಲಾಗಿತ್ತು. ಗುಂಪು ಅಲ್ಲಿಂದಲೇ ಸಚಿವರತ್ತ ಕಪ್ಪು ಬಾವುಟ ಪ್ರದರ್ಶಿಸಿತು. ರಸ್ತೆಯ ಇನ್ನೊಂದು ಬದಿಯಿಂದ ಸಚಿವರು ಅಲ್ಲಿಂದ ತೆರಳಲು ಪೊಲೀಸರು ಅನುವು ಮಾಡಿಕೊಟ್ಟರು.