ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂದಿರಾನಗರ ಸಮೀಪದ ಮೋಟ್ಟನಪಾಳ್ಯ ನಿವಾಸಿಯಾದ ನಾನು, ಮನೆ ಸಮೀಪವೇ ಅಂಗಡಿ ಇಟ್ಟುಕೊಂಡಿದ್ದೇನೆ. ಡಿ.31ರ ರಾತ್ರಿ ಹೊಸ ವರ್ಷದ ಆಚರಣೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಅಣ್ಣ–ತಂಗಿ ಮೇಲೆ 20ಕ್ಕೂ ಹೆಚ್ಚು ಪುಂಡರು ಹಲ್ಲೆ ನಡೆಸಿದ್ದರು. ಆ ದೃಶ್ಯ ನಮ್ಮ ಕಟ್ಟಡದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಪರಿಚಿತ ಮಾಧ್ಯಮ ಸ್ನೇಹಿತರಿಗೆ ಕೊಟ್ಟಿದ್ದೆ’ ಎಂದು ಹೇಳಿದರು.