ಕಲಬುರ್ಗಿ: ಎಸ್.ಕಾರ್ಣಿಕಾಶ್ರೀ, ಮಾನಸಾ ರಾವತ್ ಮತ್ತು ಸಾತ್ವಿಕ್ ಶಂಕರ್, ತುಷಾರ್ ಸುವೀರ್ ಜೋಡಿ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಬ್ ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.
ಶನಿವಾರ ನಡೆದ 13 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ನ ಸೆಮಿಫೈನಲ್ನಲ್ಲಿ ಎಸ್.ಕಾರ್ಣಿಕಾಶ್ರೀ, ಮಾನಸಾ ರಾವತ್ (ಉತ್ತರಾಖಂಡ್) 19–21, 21–17, 23–21ರಲ್ಲಿ ಉತ್ತರ ಪ್ರದೇಶದ ಸಮಯರ ಪನ್ವಾರ್, ತೆಲಂಗಾಣದ ಶ್ರಿಯಾನ್ಸಿ ವಾಲಿಶೆಟ್ಟಿ ಅವರನ್ನು ಮಣಿಸಿದರು.
ಈ ಜೋಡಿ ಕ್ವಾರ್ಟರ್ ಫೈನಲ್ನಲ್ಲಿ 21–15, 21–10ರಲ್ಲಿ ಗುಜರಾತ್ನ ಬೃಂದಾ ಶಿಂಧೆ, ಐಶಾನಿ ತಿವಾರಿ ಅವರಿಗೆ ಸೋಲುಣಿಸಿತು.
13 ವರ್ಷದೊಳಗಿನ ಬಾಲಕರ ಡಬಲ್ಸ್ನಲ್ಲಿ ಸಾತ್ವಿಕ್ ಶಂಕರ್, ತುಷಾರ್ ಸುವೀರ್ ಜೋಡಿ 21–7, 21–15ರಲ್ಲಿ ಮಹಾರಾಷ್ಟ್ರದ ಆದ್ಯಾ, ಪ್ರಜ್ವಲ್ ಸೋನ್ವಾನ್ ವಿರುದ್ಧ ಗೆದ್ದರು.
15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ವಿಜೇತಾ ಹರೀಶ್ ಅವರು 17–21, 21–17, 21–14ರಲ್ಲಿ ನಾಲ್ಕನೇ ಶ್ರೇಯಾಂಕದ ಮಹಾರಾಷ್ಟ್ರದ ತಾರಾ ಶಾ ಎದುರು ಸೋಲನುಭವಿಸಿದರು.
13 ವರ್ಷದೊಳಗಿನ ಬಾಲಕರ ಸಿಂಗಲ್ಸ್ನ ಸೆಮಿಫೈನಲ್ನಲ್ಲಿ ಸಾತ್ವಿಕ್ ಶಂಕರ್ 22–20, 16–21, 21–15ರಲ್ಲಿ ಮೂರನೇ ಶ್ರೇಯಾಂಕದ ಹರಿಯಾಣದ ಗಗನ್ ಎದುರು ಸೋಲು ಕಂಡರು.