ಎರಡನೇ ಕ್ವಾರ್ಟರ್ನಲ್ಲಿ ಶಂಕರ್ ಸಿದ್ಧಾರ್ಥ್ (22ನೇ ನಿಮಿಷ), ಶಂಕರ್ ಪಾಟೀಲ್ (23) ಹಾಗೂ ತಿಮ್ಮಣ್ಣ ಎಸ್.ಪುಲಿಯಂಡ (30) ಸೆಂಟ್ರಲ್ ಸೆಕ್ರೆಟರಿಯೇಟ್ಗೆ ಗೋಲು ತಂದಿತ್ತರು. ಮೂರನೇ ಕ್ವಾರ್ಟರ್ನಲ್ಲೂ ತಿಮ್ಮಣ್ಣ ಎರಡು ಗೋಲು ಗಳಿಸಿದರು. 31 ಮತ್ತು 39ನೇ ನಿಮಿಷಗಳಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಅವರು ತಂಡದ ಮುನ್ನಡೆಯನ್ನು 5–0ಗೆ ಏರಿಸಿದರು.