ಕಮಲಾ ಮಿಲ್ ಪಾಲುದಾರ ರವಿ ಭಂಡಾರಿ, ಅಗ್ನಿಶಾಮಕ ಠಾಣೆ ಅಧಿಕಾರಿ ರಾಜೇಂದ್ರ ಪಾಟೀಲ, ನಿರ್ವಾಣ ಹುಕ್ಕಾ ಮಾಲೀಕ ಉತ್ಕರ್ಷ್ ಪಾಂಡೆ ಅವರನ್ನು ಎನ್.ಎಂ.ಜೋಶಿ ಮಾರ್ಗ ಪೊಲೀಸರು ಬಂಧಿಸಿ, ಭೋಜವಾಡಾ ನ್ಯಾಯಾಲಯದ ನ್ಯಾಯಾಧೀಶರ ಎದುರು ಭಾನುವಾರ ಮಧ್ಯಾಹ್ನ ಹಾಜರುಪಡಿಸಿದರು. ನ್ಯಾಯಾಲಯ ಬಂಧಿತರನ್ನು ಪೊಲೀಸ್ ವಶಕ್ಕೆ ನೀಡಿದೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಅಹಮ್ಮದ್ ಪಠಾಣ ತಿಳಿಸಿದ್ದಾರೆ.