ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರ್ಭಯವಾಗಿ ನಡೆಯಲು ಬಿಡಿ’

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಲು ನಗರದ ಎಲ್ಲ ಸಿಗ್ನಲ್‌ಗಳಲ್ಲೂ ಪೆಲಿಕಾನ್ ಬಟನ್‌ಗಳನ್ನು (ಪಾದಚಾರಿ ಗುಂಡಿ) ಅಳವಡಿಸಬೇಕು ಎಂದು ಒತ್ತಾಯಿಸಿ ಸಿಟಿಜನ್ಸ್ ಫಾರ್ ಬೆಂಗಳೂರು ಸಂಘಟನೆಯು ನಗರದಲ್ಲಿ ಶನಿವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿತು.

ಸಂಘಟನೆಯು ಆರಂಭಿಸಿರುವ ‘ನಡೆಯಲು ಬಿಡಿ’ ಹಾಗೂ ‘ವಾಕ್‌ ಸಿಗ್ನಲ್‌’ ಬೇಕು ಎಂಬ ಅಭಿಯಾನಗಳ ಮುಂದುವರೆದ ಭಾಗವಾಗಿ ಈ ಪ್ರತಿಭಟನೆ ನಡೆಸಲಾಗಿದೆ.

ಪಾದಚಾರಿ ಮಾರ್ಗಗಳಲ್ಲಿ ಹಾಗೂ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ನಿರ್ಭಯವಾಗಿ ನಡೆದಾಡುವ ಹಕ್ಕನ್ನು ಜನತೆಗೆ ಕಲ್ಪಿಸಬೇಕು. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಕೆಂಪು ದೀಪ ಉರಿಯುವಾಗಲೂ ನಿಯಮ ಉಲ್ಲಂಘಿಸಿ ಕೆಲವು ವಾಹನ ಸವಾರರು ಮುನ್ನುಗ್ಗುತ್ತಾರೆ. ಇದರಿಂದಾಗಿ ರಸ್ತೆ ದಾಟುವವರು ಅಪಘಾತಕ್ಕೀಡಾಗುತ್ತಿದ್ದಾರೆ. ಹೀಗಾಗಿ, ಪಾದಚಾರಿಗಳ ಸುರಕ್ಷತೆಗೆ ಕ್ರಮಕೈಗೊಳ್ಳಬೇಕು ಎಂದು ಸಂಘಟನೆಯ ಶ್ರೀನಿವಾಸ ಅಲವಿಲ್ಲಿ ಒತ್ತಾಯಿಸಿದರು.‌

ನಗರದಲ್ಲಿ ನೂರಾರು ಸ್ಕೈವಾಕ್‌ಗಳಿದ್ದರೂ ಅವುಗಳನ್ನು ಜನ ಬಳಸುತ್ತಿಲ್ಲ. ಹಿರಿಯರಿಗೆ ಸ್ಕೈವಾಕ್‌ಗಳನ್ನು ಹತ್ತಿ ಹೋಗಲು ಸಾಧ್ಯವಾಗದು. ಎಂದರು.

ಸಂಘಟನೆಯ ತಾರಾ ಕೃಷ್ಣಮೂರ್ತಿ, ‘ಡೆನ್ಮಾರ್ಕ್‌ ದೇಶದ ಸಂಚಾರ ಸಿಗ್ನಲ್‌ಗಳಲ್ಲಿ ಈಗಾಗಲೇ ಪೆಲಿಕಾನ್‌ ಬಟನ್‌ಗಳ ವ್ಯವಸ್ಥೆಯ ಬಳಕೆಯಲ್ಲಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT