ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನಗಳಲ್ಲಿ ₹107ಕೋಟಿ ವಹಿವಾಟು

Last Updated 21 ಜನವರಿ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ಅರಮನೆಯಲ್ಲಿ ಮೂರು ದಿನ ನಡೆದ ‘ಸಾವಯವ ಮತ್ತು ಸಿರಿಧಾನ್ಯ 2018– ಅಂತರರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ಭಾನುವಾರ ಸಂಪನ್ನಗೊಂಡಿದೆ. ಮೇಳದಲ್ಲಿ ಒಟ್ಟು ₹107 ಕೋಟಿ ವಹಿವಾಟು ನಡೆದಿದೆ.

ಸಾವಯವ ಉತ್ಪನ್ನಗಳಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಿಕೊಡಲು 14 ರೈತ ಒಕ್ಕೂಟಗಳು ಹಾಗೂ ಉದ್ಯಮಿಗಳೊಂದಿಗೆ ₹27.69 ಕೋಟಿ ಮೊತ್ತದ 34 ಇಂಗಿತ ಪತ್ರಗಳಿಗೆ (ಎಲ್‌ಒಐ) ಸಹಿಹಾಕಿವೆ. ಇದರ ಜೊತೆಗೆ ₹340 ಕೋಟಿ ಮೊತ್ತದ ದೀರ್ಘಕಾಲಿನ (ಮೂರು ವರ್ಷಗಳು) ಒಪ್ಪಂದಗಳು ಆಗಿವೆ. 

‘ರೈತರೊಂದಿಗೆ ನೇರವಾಗಿ ವ್ಯವಹರಿಸಲು ಕಂಪನಿಗಳು ಸುಮಾರು ₹5 ಕೋಟಿ ವಹಿವಾಟಿನ ಒಪ್ಪಂದ ಮಾಡಿಕೊಂಡಿವೆ. ಭವಿಷ್ಯದಲ್ಲಿ ಇದು ₹50 ಕೋಟಿಗೂ ವಿಸ್ತರಣೆಯಾಗುವ ನಿರೀಕ್ಷೆ ಇದೆ. ವಾಣಿಜ್ಯ ಮೇಳದಲ್ಲಿ ಮೊದಲ ದಿನವೇ ಸುಮಾರು ₹20 ಕೋಟಿ ವಹಿವಾಟು ನಡೆದಿತ್ತು’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT