ಸದಾಶಿವ ವರದಿ ಪ್ರಕಾರ, ಮಾದಿಗ ಸಮುದಾಯಕ್ಕೆ ಶೇ 6ರಷ್ಟು, ದಲಿತರಿಗೆ ಶೇ 5, ಭೋವಿ, ಕೊರಮ, ಕೊರಚ ಮತ್ತು ಲಂಬಾಣಿ ಜಾತಿಗಳಿಗೆ ಶೇ 3, ಅಲೆಮಾರಿ ಸಮುದಾಯಕ್ಕೆ ಶೇ 1ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿದೆ. ಈ ವರದಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.