ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿದ್ದ ಇವರು ಕೃಷಿಕರು. ‘ಕಾವ್ಯ ಮೀಮಾಂಸೆ ಹೊಳಹುಗಳು’ (ಮಂಗಳೂರು ವಿಶ್ವ ವಿದ್ಯಾಲಯ), ‘ಅಭಿನವಗುಪ್ತ’ (ಅಕ್ಷರ ಪ್ರಕಾಶನ) ಎರಡು ಕೃತಿಗಳು ಪ್ರಕಟವಾಗಿವೆ. ನವ್ಯ ಕವಿ ಅಡಿಗರ ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟಿತ ಲೇಖನಗಳಿಂದ ಇವರು ಜನಪ್ರಿಯರಾಗಿದ್ದರು.