ಪ್ರಕಾಶ್ ರೈ ಇತ್ತೀಚೆಗೆ ಶಿರಸಿಯ ರಾಘವೇಂದ್ರ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ, ದೇಶದಲ್ಲಿ ಈಗ ಅಸಮಾನತೆ ಹೆಚ್ಚುತ್ತಿರುವ ಕುರಿತು ಹಾಗೂ ಸೌಹಾರ್ದವನ್ನು ಹಾಳುಗೆಡವುತ್ತಿರುವ ಸಮೂಹಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವುದು ಸಕಾಲಿಕ.
ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರ ಅಪ್ರಬುದ್ಧ ಹೇಳಿಕೆಗಳು, ಪುಂಡಾಟಿಕೆ ನಡೆಸುವವರಿಗೆ ಪ್ರೇರಣೆಯಾಗುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ದೇವರು, ಧರ್ಮ, ಮತಗಳ ಹೆಸರಿನಲ್ಲಿ ಕಂದಕಗಳನ್ನು ಸೃಷ್ಟಿಸುವುದು ನಮ್ಮ ಸಂವಿಧಾನಕ್ಕೆ ಬಗೆಯುವ ದ್ರೋಹ.