ಸುತ್ತೂರು ಕ್ಷೇತ್ರದಲ್ಲಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಭಾಗವಹಿಸಿದ್ದ ರಂಭಾಪುರಿ ಮಠದ ಪ್ರಸನ್ನ ವೀರೇಶ್ವರ ಶಿವಾಚಾರ್ಯ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿರುವ ಮಾತು ‘ಬಸವಣ್ಣನ ಗುತ್ತಿಗೆ ಹಿಡಿದವರಂತೆ ವರ್ತನೆ’ ಶೀರ್ಷಿಕೆಯಡಿ ಪ್ರಕಟವಾಗಿದೆ (ಪ್ರ.ವಾ., ಜ.19). ಗುತ್ತಿಗೆ ಹಿಡಿಯುವುದು ವ್ಯವಹಾರ, ಲಾಭ ಮಾಡಿಕೊಳ್ಳುವುದಕ್ಕೆ. ಶರಣ ಧರ್ಮವು ಗುತ್ತಿಗೆಯ ಧರ್ಮವಲ್ಲ. ಈ ದೇಶದಲ್ಲಿ ಅನೇಕ ಪಟ್ಟಭದ್ರರು ದೇವರು, ಧರ್ಮ, ಭಕ್ತಿ, ಪೂಜೆಯನ್ನು ತಮ್ಮ ಅವಿಚಾರಗಳಿಂದ ಗುತ್ತಿಗೆ ಹಿಡಿಯುತ್ತಲೇ ಬಂದಿದ್ದಾರೆ.