ಮೂಡಿಗೆರೆ: ತಾಲ್ಲೂಕಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಬೃಹತ್ ವಾಹಗಳ ಸಂಚಾರ ನಿಷೇಧಿಸಿದ್ದರೂ 10 ಚಕ್ರದ ಲಾರಿಗಳು ಸೇರಿದಂತೆ ಘನ ವಾಹನಗಳು ಸಂಚರಿಸುತ್ತಿರುವುದರಿಂದ ಹೆದ್ದಾರಿ ಸಂಚಾರ ದುಸ್ತರವಾಗಿದೆ.
ಶಿರಾಡಿ ಘಾಟಿ ಬಂದ್ ಮಾಡಿದ ನಂತರ ಲಘು ವಾಹನಗಳಿಗೆ ಕರಾವಳಿ ತಲುಪಲು ಚಾರ್ಮಾಡಿ ಘಾಟಿ ಮೂಲಕ ಅವಕಾಶ ಕಲ್ಪಿಸಿದ್ದು, ಘನ ವಾಹಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಆದರೆ, ನಿಷೇಧವಿದ್ದರೂ ಹಗಲು–ರಾತ್ರಿ ಘನ ವಾಹನಗಳು ಸಂಚರಿಸುತ್ತಿರುವುದರಿಂದ, ಘಾಟಿಯ ಹಿಮ್ಮುರಿ ತಿರುವುಗಳಲ್ಲಿ, ಲಾರಿಗಳು ಸರಾಗವಾಗಿ ಚಲಿಸಲಾರದೇ, ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.