‘ಸಾವುನೋವು ಸಂಭವಿಸುವ ಪ್ರಮಾಣದಲ್ಲಿ ಚಳಿಯ ತೀವ್ರತೆ ಇಲ್ಲ. ಆದರೂ ವೃದ್ಧರು, ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು, ಪಾರ್ಶ್ವವಾಯು ಪೀಡಿತರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆಸ್ತಮಾ ರೋಗಿಗಳು ಬೆಳಗ್ಗಿನ ಬಿಸಿಲು ಕಾಣಿಸಿಕೊಳ್ಳುವವರೆಗೂ ಮನೆಯಿಂದ ಹೊರ ಬರದಿರುವುದು ಒಳಿತು. ಆದಷ್ಟು ಬೆಚ್ಚಗಿನ ಉಡುಪು ಧರಿಸಬೇಕು. ಬಿಸಿ ನೀರು ಕುಡಿಯಬೇಕು. ವಾಯುವಿಹಾರ ತಾತ್ಕಾಲಿಕ ಕೈಬಿಡುವುದು ಸೂಕ್ತ’ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ಸಲಹೆ ನೀಡಿದ್ದಾರೆ.